ಆರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಮನ್ಸೂರ್ ಹಾಗೂ ಮುತ್ತುರಾಜು ನಿರ್ಮಿಸುತ್ತಿರುವ ‘ಅರ್ಜುನಾ‘ ದೇವರಾಜ್ ಹಾಗೂ ಪ್ರಜ್ವಲ್ದೇವರಾಜ್ ಅಭಿನಯಿಸಿದ್ದಾರೆ. ಇಬ್ಬರೂ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ಭಾಮ, ಕಡ್ಡಿಪುಡಿ ಚಂದ್ರು, ಗಿರೀಶ್, ರಮೇಶ್ಭಟ್, ರಾಜಶೇಖರ್ನಾಯ್ಡು, ‘ಪ್ರೀತಿ ಗೀತಿ ಇತ್ಯಾದಿ‘ ಚಿತ್ರದ ನಿರ್ಮಾಪಕ ವಿಜಯ್ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪಿ.ಸಿ.ಶೇಖರ್ ನಿರ್ದೇಶನದ ಕುತುಹಲಕಾರಿ ಕಥಾಹಂದವುಳ್ಳ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.
ಅರ್ಜುನ್ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕುಮರನ್ ಅವರ ಛಾಯಾಗ್ರಹಣವಿದೆ. ಸರವಣ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ‘ಅರ್ಜುನಾ‘ ಚಿತ್ರಕ್ಕಿದೆ.